Gruhalakshmi New Rules: ಸೆಪ್ಟೆಂಬರ್ 14 ಕೊನೆಯ ದಿನ! ಈ ಕೆಲಸ ಕಡ್ಡಾಯ; ಇಲ್ಲವಾದಲ್ಲಿ ಗೃಹಲಕ್ಷ್ಮಿ ₹2,000 ಹಣ ಬರಲ್ಲ!

Gruhalakshmi New Rules: ನಮಸ್ಕಾರ ಎಲ್ಲರಿಗೂ, ಗೃಹಲಕ್ಷ್ಮಿ ಯೋಜನೆಗೆ ನೀವು ಅರ್ಜಿ ಹಾಕಿ ಪ್ರತಿ ತಿಂಗಳು ಕೂಡ ₹2,000 ರೂಪಾಯಿ ಹಣವನ್ನು ಪಡೆಯುತ್ತಿದ್ದೀರಿ ಅಂತ ಅಂದರೆ, ಈ ಕೆಲಸವನ್ನು ಕಡ್ಡಾಯವಾಗಿ ನೀವು ಸೆಪ್ಟೆಂಬರ್ 14ನೇ ತಾರೀಖಿನ ಒಳಗಾಗಿ ಮಾಡಬೇಕಾಗುತ್ತದೆ. ಅದೇನಂಬುವುದನ್ನು ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ. 

ಸೆಪ್ಟೆಂಬರ್ 14ನೇ ಒಳಗಾಗಿ ಏನು ಮಾಡಬೇಕು: 

ಸ್ನೇಹಿತರೆ, ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿ ₹2,000 ಹಣವನ್ನು ಪಡೆದುಕೊಳ್ಳುತ್ತಿದ್ದರೆ, ಸೆಪ್ಟೆಂಬರ್ 14ನೇ ತಾರೀಖಿನ ಒಳಗಾಗಿ ಮಹಿಳೆಯರು “ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಬೇಕು” ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ. 

ಆಧಾರ್ ಕಾರ್ಡನ್ನು ತಯಾರಿಸಿ ಹತ್ತು ವರ್ಷಗಳ ಕಾಲ ಯಾರು ಕೂಡ ಇನ್ನು ಆಧಾರ್ ಕಾರ್ಡ್ ಮಾಡಿಸಿಲ್ಲ ಅಂತವರು ತಮ್ಮ ಆಧಾರ್ ಕಾರ್ಡನ್ನು ಸೆಪ್ಟೆಂಬರ್ 14ನೇ ತಾರೀಖಿನ ಒಳಗಾಗಿ ಕಡ್ಡಾಯವಾಗಿ ಅಪ್ಡೇಟ್ ಮಾಡಿಸಬೇಕು. ಸೆಪ್ಟೆಂಬರ್ 14ನೇ ತಾರೀಖಿನ ಒಳಗಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದಂತಹ ಎಲ್ಲಾ ಮಹಿಳೆಯರು ಅಂದರೆ ಹತ್ತು ವರ್ಷಗಳ ಕಾಲ ಆಧಾರ್ ಕಾರ್ಡ್ ನಲ್ಲಿ ಯಾವುದೇ ರೀತಿಯ ನವೀಕರಣಗಳನ್ನು ಮಾಡಿಸದೆ ಇದ್ದ ಮಹಿಳೆಯರಿಗೆ ಮಾತ್ರ ಈ ವಿಷಯ ಅನ್ವಯಿಸಲಿದೆ. 

ಹಾಗಾಗಿ ಪ್ರತಿ ತಿಂಗಳು ಕೂಡ ನೀವು ಗೃಹಲಕ್ಷ್ಮಿ ಯೋಜನೆಯಡಿ ₹2,000 ಹಣವನ್ನು ಪಡೆದುಕೊಳ್ಳಬೇಕೆಂದರೆ ನೀವೇನಾದರೂ 10 ವರ್ಷದ ಒಳಗಡೆ ಆಧಾರ್ ಕಾರ್ಡ್ ನಲ್ಲಿ ಯಾವುದೇ ರೀತಿಯ ಬದಲಾವಣೆಗಳು ಮತ್ತು ಆಧಾರ್ ನವೀಕರಣವನ್ನು ಮಾಡಿಸದೆ ಇದ್ದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣವು ರದ್ದಾಗುವ ಸಾಧ್ಯತೆ ಇರುತ್ತದೆ. ಆಧಾರ್ ಕಾರ್ಡಿನ ಮೇಲೆ ನೀವು ತೆಗೆಸಿರುವಂತಹ ಡೇಟ್ ಇರುತ್ತದೆ ಅದನ್ನು ನೋಡಿಕೊಂಡು ನಿಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಿಕೊಳ್ಳಿ.

ಆಧಾರ್ ಅಪ್ಡೇಟ್ ಮಾಡಿಸುವುದು ಹೇಗೆ: 

ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಲು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಬಹುದು ಹಾಗೂ ನೀವು ನಿಮ್ಮ ಮೊಬೈಲ್ ಮೂಲಕ ಆಧಾರ್ ನವೀಕರಣವನ್ನು ಮಾಡಿಕೊಳ್ಳಬಹುದಾಗಿದೆ. ನಿಮ್ಮ ಮೊಬೈಲ್ ನಲ್ಲಿ ಕೇಳಲಾಗುವ ಎಲ್ಲಾ ದಾಖಲೆಗಳನ್ನು ಒದಗಿಸುವ ಮೂಲಕ ಆಧಾರ್ ಕಾರ್ಡನ್ನು ನವೀಕರಣ ಮಾಡಿಕೊಳ್ಳಬಹುದಾಗಿದೆ.

WhatsApp Group Join Now
Telegram Group Join Now
error: Content is protected !!